Monday, June 29, 2009

ನಾ ಬರೆದ ಕಾವ್ಯ...

ನಾ ಬರೆದ ಕಾವ್ಯ, (ಕಾವ್ಯವೇ... ಎಂಬ ಜಿಜ್ನಾಸೆ ನನ್ನಲ್ಲಿ ಇನ್ನೂ ಕಾಡುತ್ತಿದೆ)
ಎಂದೋ ಒದಿದ ಒಳ್ಳೆ ಕವಿತೆಗಳಿಂದ ಸ್ಪೂರ್ತಿಗೊಂಡು, ನನ್ನಲ್ಲೂ ಹುಟ್ಟಿದ ಮಾನವ ಸಹಜ
ಬಯಕೆಗೆ ನೀರೆರೆದು ಪೊಷಿಸಿದಾಗ ಹುಟ್ಟಿದ ಬ್ರೂಣಾವಸ್ಥೆಯ ಶಿಶು.

ನನ್ನ ಈ ಬಹುದಿನಗಳ "ಕಾವ್ಯಮಿಮಾಂಸೆಯ" ಪ್ರಸವ ವೇದನೆಯನ್ನು ಕೆಳಗಿನ ಕಾವ್ಯಗಳಿಂದ ಪೂರ್ಣಮಾಡಿಕೊಳ್ಳುತ್ತಿದ್ದೇನೆ, ಇದು ಗರ್ಭಪಾತವೊ..ಸರಳ ಹೆರಿಗೆಯೋ ಎಂಬ ತೀರ್ಪು ನಿಮ್ಮದು. ತುಂಬು ಹ್ರುದಯದಿಂದ ಸ್ವೀಕರಿಸುತ್ತೀರೆಂಬ ನಂಬಿಕೆ ಮಾತ್ರ ನನ್ನದು.

ಮನೆವರೆಗೆ ಬಂದವಳು ಮನೆಯೊಳಗೂ(ಮನದೊಳಗೂ ?) ಬಂದಳು ಎನ್ನುವಂತೆ..
ಮನದೊಳಗೆ ಮೂಡಿದ ದ್ರುಶ್ಯಕ್ಕೆ, ಕಾವ್ಯ ಸ್ಪರ್ಶ ಕೊಟ್ಟಿದ್ದೇನೆ.

ವಿಮರ್ಶೆಯು ವ್ಯಕ್ತಿಯ ಮೊದಲಿನ ತಪ್ಪಿನ ಪುನರಾವರ್ತನೆಯನ್ನು ತಪ್ಪಿಸುತ್ತದೆ, ಭವಿಷ್ಯದ ಕೆಲಸಗಳಿಗೆ ಎಚ್ಚರಿಸುತ್ತದೆ, ಮುಂದಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ,ಮತ್ತು ಸ್ರುಜನಶೀಲತೆ ಹಾಗೂ ಕ್ರಿಯಾಶೀಲತೆಗೆ ಉತ್ತೇಜಿಸುತ್ತದೆ.ಒಟ್ಟಿನಲ್ಲಿ ವ್ಯಕ್ತಿಯ ಏಳ್ಗೆಗೆ ವಿಮರ್ಶೆ ಸಹಕಾರಿ. ದಯವಿಟ್ಟು ಸಹಕರಿಸಿ.


ನೀನ್ಯಾರೆ ?

ನಿನ್ನದೊಂದು ನೆನಪು, ಮುಂಗಾರು ಮಳೆಯಲ್ಲಿ ಮಿಂದೆದ್ದ ಅನುಭವ
ನಿನ್ನದೊಂದು ಕನಸು, ಸಿಹಿ ಸಂಜೆಯಲಿ ತಂಗಾಳಿ ಸ್ಪರ್ಶಿಸಿದ ಕಲರವ

ಮಲೆನಾಡ ಸಿರಿಯೂ ಮರುಳಾಗಿ ನಿಂತಿದೆ ನಿನ್ನ ರೂಪ ರಾಶಿಗೆ
ಬರುಡಾದ ಮನಸು ಹಸಿರಾಗಿ ಮಾಗಿದೆ ಸೌಂದರ್ಯ ಸೊಬಗಿಗೆ

ಕಹಿ ಬೇವು ಕೂಡ ಸಿಹಿಯೆನಿಸಿದೆ, ನಿನ್ನ ನೆನೆದ ಆ ಕ್ಷಣ
ಕ್ಷಣ ಕೂಡ ಯುಗವಾಗಿ ವಿರಹಿಸಿದೆ, ನೀನಿಲ್ಲದ ಈ ಕ್ಷಣ

ನೀ ನಡೆವ ಹಾದಿಯಲಿ ಕನಸಲ್ಲೂ ಜೊತೆಯಿರುವೆ
ನೆರಳಂತೆ ಹಿಂಬರುವೆ ನೆರಳಾಗಿ ಹಿತಕೊಡುವೆ

ಬರಿದಾದ ಮನಸಲ್ಲಿ ಭಾವನೆ ತರಿಸಿದವಳೆ
ಮರುಭೂಮಿ ಬಿಸಿಲಲ್ಲೂ ತಂಪು ಸುರಿಸುವವಳೆ...

ಮಿಂಚಾಗಿ ಬಂದೆ, ಮಿಂಚಂತೆ ಹೋದೆ.... ನೀನ್ಯಾರೆ ?



"ಅಮ್ರುತಘಳಿಗೆ"

ನನ್ನವಳು ನನ್ನೆದುರು ನಸುನಗುತ ನಿಂತಾಗ...

ಮುದ್ದಾದ ಮುಖದಲ್ಲಿ ಮಂದಹಾಸ ತೇಲಿಬಂತು
ನಾಚಿಕೆಯು ಮೈದುಂಬಿ ಅಪ್ಸರೆಯ ನಾಚಿಸಿತು

ಕಣ್ಣು ನೋಟ ಬೀರಿತು, ರೆಕ್ಕೆ ಬಡಿದು ಸಮ್ಮತಿ ನೀಡಿತು
ಮುಂಗುರುಳು ಕೂಡ ಮುಂಚಾಚಿ ಶುಭಕೋರಿತು

ಧರೆ ಕೂಡ ತಂಪಾಗಿ ತಂಗಾಳಿ ತೇಲಿ ಬಂತು
ಬಾನಿಂದ ಮೊಡ ಕರಗಿ ಮಳೆಯಾಗಿ ಸಿಂಚಿಸಿತು

ಹಗಲಲ್ಲೂ ಶಶಿಗೆ ಸ್ಪರ್ಶಿಸುವ ಮನಸಾಯ್ತು
ಭಾಸ್ಕರನ ಬೇಗ ಬರುವಂತೆ ಭಿನ್ನವಿಸಿತು

ಮಣಭಾರ ಮನಸು ನವಿರಾಗಿ ತಿಳಿಯಾಯ್ತು
ಜೀವ ಕಾವ್ಯ ಬರೆಯಿತು, ಕಾವ್ಯ ನನ್ನವಳ ಕಣ್ಸೆಳೆಯಿತು

ಹುದುಗಿಟ್ಟ ಪ್ರೀತಿಯ ಮನಸು ತೆರೆದಿಟ್ಟಿತು
ಜೊಡಿ ಜೀವಗಳ ಜೀವನ ಶುರುವಾಯಿತು


ಮಾನಸವಾಣಿಯಿಂದ:
-ಚಂದ್ರು
csbyadgi@gmail.com









12 comments:

  1. nee yavago ist intavella bariyakhatte.? eega time banta athava time hatra bantaa!?

    very nice.. good to see that u ve joined our club of elite writers/composers

    ReplyDelete
  2. Good one...

    ನಿನ್ನಲ್ಲೂ ಒಬ್ಬ ಕವಿ ಇದ್ದಾನೆ... ಅದನ್ನು ಜಗತ್ತಿಗೆ ತೋರಿಸು..

    ಮತ್ತಷ್ಟು ಕವಿತೆಗಳು ಬರಲಿ...

    ReplyDelete
  3. Kavithegalu chennagive.. Modala prayatna nijakkoo abhinanadaneeya.. neenu bareda munnudi ishtavaithu.. so u can write articles also !!. Chandru ondu sanna salahe..halavaranthe prasa padagalige , last bench prema kavithegalige seemithavagade.. neenu proudha kavithegalannu baraeyuvatha hejje haku endu haraisuve.. Anyways your poems and foreword are well appreciated.. ... hats off buddy.... awaiting many more writings..

    ReplyDelete
  4. wow man these are simply great!! BTW yaarige antha bardiddu???? she is so lucky :) Keep up the good work.. waiting for the next mouna raagaaa....... :)

    ReplyDelete
  5. This comment has been removed by the author.

    ReplyDelete
  6. ಈ "ಅಮ್ರುತಘಳಿಗೆ" ಯಲ್ಲಿ "ನೀನ್ಯಾರೆ ?" ಎನ್ನುವಾಗ ...
    ಮತ್ತೆ ಮತ್ತೆ ನೆನಪಾಯ್ತು ನನ್ನ- ಅವಳ ಸ್ನೇಹ ..
    ಸಾಕು ಸಾಕೇಂದರು ಕಾಡುತ್ತಿದೆ ನನ್ನವಳ ಪ್ರೇಮ.
    ಮುಂಜಾನೆ ಎದ್ದು ಕಾವ್ಯ ಕದ್ದು(from chandru) ...ಮತ್ತೆ ಮತ್ತೆ ಹಾಡಿದೆ
    "ನೀನ್ಯಾರೆ ?" .."ನೀನ್ಯಾರೆ ?"

    ಗೆಳೆಯ--> ಶ್ರೀನಿವಾಸ.N.C(NC)

    ReplyDelete
  7. abhimaanigala balagave ideyalla nimgae..Really nice...I read almost all articles of urs...
    Even am also a poetry lover...Thanks for giving wonderful words...

    ReplyDelete
  8. na first time nod dhe so nice , preethi mado hrudhayake nagu tharuthe haage marubhoomi manasige kaarangi haage hale nenpu tharuthe .........................

    ReplyDelete
  9. Informasi yang sangat bagus dan bermanfaat

    ReplyDelete

sooryasta

sooryasta

Followers